ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY ಯೋಜನೆ 2026) ಕೇಂದ್ರ ಸರ್ಕಾರವು, ಜನಸಾಮಾನ್ಯರಿಗಾಗಿ ರೂಪಿಸಿದ ಕಡಿಮೆ ಪ್ರೀಮಿಯಂ ಹೊಂದಿದ ಅಪಘಾತ ವಿಮಾ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಭಾಗಿಯಾದ ವ್ಯಕ್ತಿಗಳು ಅಕಸ್ಮಾತ್ ಅಪಘಾತದಿಂದ ಮರಣ ಸಂಭವಿಸಿದರೆ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದರೆ, ಈ ಯೋಜನೆಯಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಪಾಲುಗೊಳ್ಳಲು ನೀವು, ನಿಮ್ಮದೇ ಆದ ಬ್ಯಾಂಕ್ ಅಕೌಂಟ್ ಅಥವಾ ಅಂಚೆ ಕಚೇರಿ ಖಾತೆಯನ್ನು ಹೊಂದಿರಬೇಕು.
ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು ಹಾಗೂ 70 ವರ್ಷದವರೆಗೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚು ಪ್ರೀಮಿಯಂ ಹಣ ನೀಡಿ ಅಪಘಾತ ವಿಮೆ ಹೊಂದಲು ಅನುಕೂಲವಿಲ್ಲದ ಜನರಿಗಾಗಿಯೇ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಬ್ಯಾಂಕ್ ಖಾತೆ ಹೊಂದಿರುವ ಎಲ್ಲರೂ ಪಡೆಯಬಹುದಾಗಿದೆ.
ಪ್ರತೀ ವರ್ಷಕ್ಕೆ ಕೇವಲ ₹20 ರೂಪಾಯಿ ಪ್ರೀಮಿಯಂ ಪಾವತಿಸುವ ಮೂಲಕ ₹2 ಲಕ್ಷದವರೆಗೆ ವಿಮೆಯನ್ನು ಪಡೆಯಬಹುದಾಗಿದೆ. ಸಂಪೂರ್ಣ ವಿವರಗಳಿಗೆ ಈ ಲೇಖನವನ್ನು ಓದಿ.
ಪ್ರೀಮಿಯಂ :
ಪ್ರತಿ ಸದಸ್ಯರಿಗೆ ವರ್ಷಕ್ಕೆ ರೂ.20/- ಪ್ರೀಮಿಯಂ ಪಾವತಿಸಬೇಕು. ಯೋಜನೆಯ ವಾರ್ಷಿಕ ಕವರ್ ಅವಧಿಗೆ ಪ್ರತಿ ವರ್ಷ ಜೂನ್ 1ರೊಳಗೆ ಖಾತೆದಾರರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯಿಂದ ‘ಆಟೋ ಡೆಬಿಟ್’ ಸೌಲಭ್ಯದ ಮೂಲಕ ಈ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
ವಿಮಾ ಅವಧಿ :
PMSBY ಯೋಜನೆಯಡಿ ವಿಮಾ ರಕ್ಷಣೆ ಒಂದು ವರ್ಷದವರೆಗೆ ಮಾನ್ಯವಾಗಿದ್ದು, ಪ್ರತಿ ವರ್ಷ ಜೂನ್ 1ರಿಂದ ಮುಂದಿನ ವರ್ಷದ ಮೇ 31ರವರೆಗೆ ಅನ್ವಯಿಸುತ್ತದೆ.
ಅಪಘಾತ ವಿಮಾ ರಕ್ಷಣೆ ರದ್ದಾಗುವ ಸಂದರ್ಭಗಳು :
ಕೆಳಗಿನ ಸಂದರ್ಭಗಳಲ್ಲಿ ಸದಸ್ಯರ ಅಪಘಾತ ವಿಮಾ ರಕ್ಷಣೆ ರದ್ದಾಗಬಹುದು ಅಥವಾ ಮಿತಿಗೊಳಿಸಲಾಗಬಹುದು:
- ಸದಸ್ಯರು 70 ವರ್ಷ ವಯಸ್ಸು ತಲುಪಿದಾಗ.
- ಬ್ಯಾಂಕ್ ಖಾತೆ ಮುಚ್ಚಿದಾಗ ಅಥವಾ ವಿಮೆ ಮುಂದುವರಿಸಲು ಅಗತ್ಯವಿರುವಷ್ಟು ಶೇಷ ಮೊತ್ತ ಖಾತೆಯಲ್ಲಿ ಇಲ್ಲದಿದ್ದಾಗ.
ಒಬ್ಬ ಸದಸ್ಯರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳ ಮೂಲಕ PMSBY ಯೋಜನೆಯಲ್ಲಿ ಸೇರಿದ್ದು, ತಪ್ಪಾಗಿ ವಿಮಾ ಕಂಪನಿಗೆ ಬಹು ಪ್ರೀಮಿಯಂ ಜಮಾ ಆಗಿದ್ದರೆ, ವಿಮಾ ರಕ್ಷಣೆ ರೂ.2 ಲಕ್ಷಕ್ಕೆ ಮಾತ್ರ ಸೀಮಿತವಾಗುತ್ತದೆ.
ಯೋಜನೆಯ ಲಾಭಗಳು
- ಮರಣ ಹೊಂದಿದಲ್ಲಿ – ನಾಮಿನಿಗೆ ರೂ.2 ಲಕ್ಷ ನೀಡಲಾಗುತ್ತದೆ.
- ಎರಡೂ ಕಣ್ಣುಗಳ ದೃಷ್ಟಿ ಸಂಪೂರ್ಣ ಕಳೆದುಕೊಳ್ಳುವುದು ಅಥವಾ ಎರಡೂ ಕೈ/ಕಾಲುಗಳ ಬಳಕೆ ಕಳೆದುಕೊಳ್ಳುವುದು ಅಥವಾ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಅಥವಾ ಕಾಲಿನ ಬಳಕೆ ಕಳೆದುಕೊಳ್ಳುವುದು – ಸದಸ್ಯರಿಗೆ ರೂ.2 ಲಕ್ಷ ನೀಡಲಾಗುತ್ತದೆ.
- ಒಂದು ಕಣ್ಣಿನ ದೃಷ್ಟಿ ಅಥವಾ ಒಂದು ಕೈ/ಕಾಲಿನ ಬಳಕೆ ಸಂಪೂರ್ಣ ಕಳೆದುಕೊಂಡಲ್ಲಿ – ಸದಸ್ಯರಿಗೆ ರೂ.1 ಲಕ್ಷ ನೀಡಲಾಗುತ್ತದೆ.
ಅರ್ಹತೆ
ಭಾಗವಹಿಸುವ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ಹೊಂದಿರುವ, 18 ವರ್ಷ ಪೂರ್ಣಗೊಂಡಿದ್ದು 70 ವರ್ಷ ವಯಸ್ಸಿನೊಳಗಿನ ವ್ಯಕ್ತಿಗಳು ಆಟೋ-ಡೆಬಿಟ್ ಸೌಲಭ್ಯಕ್ಕೆ ಒಪ್ಪಿಗೆ ನೀಡಿದರೆ ಯೋಜನೆಗೆ ಸೇರಿಸಿಕೊಳ್ಳಲಾಗುತ್ತದೆ.
ನೀವು ಈಗಾಗಲೇ ಬ್ಯಾಂಕ್ ಖಾತೆ ಹೊಂದಿದ್ದು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಅರ್ಜಿ ಸಲ್ಲಿಸದೇ ಇದ್ದರೆ, ಕೂಡಲೇ ಸಂಬಂಧಿಸಿದ ಬ್ಯಾಂಕಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಲಾಭವ್ನ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
ಹಂತ 1: PMSBY ಯೋಜನೆಗೆ ಆಫ್ಲೈನ್ ಮೂಲಕ ಸೇರಲು, ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ಅಥವಾ ಅಧಿಕೃತ ವೆಬ್ಸೈಟ್ನಿಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಬಹುದು:
ಹಂತ 2: ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿದ ಬಳಿಕ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಬೇಕಾದ ದಾಖಲೆಗಳೊಂದಿಗೆ ಬ್ಯಾಂಕ್ಗೆ ಸಲ್ಲಿಸಬೇಕು.
ಹಂತ 3: ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ, ಸದಸ್ಯರಿಗೆ ವಿಮಾ ಪ್ರಮಾಣಪತ್ರ ಸಹಿತ ಸ್ವೀಕೃತಿ ರಸೀದಿ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್ / ಅಂಚೆ ಕಚೇರಿ ಪುಸ್ತಕ
- ಗುರುತಿನ ಚೀಟಿ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಗಾತ್ರದ ಫೋಟೋ
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)
ಅಪಘಾತದ ನಂತರ ಆಸ್ಪತ್ರೆಗೆ ದಾಖಲಾದ ವೆಚ್ಚಗಳಿಗೆ ಪರಿಹಾರ ಸಿಗುತ್ತದೆಯೇ?
ಇಲ್ಲ. PMSBY ಯೋಜನೆಯಲ್ಲಿ ಆಸ್ಪತ್ರೆಗೆ ದಾಖಲಾದ ವೆಚ್ಚಗಳಿಗೆ ಪರಿಹಾರ ನೀಡುವುದಿಲ್ಲ.
ಯೋಜನೆಗೆ ಸೇರಿದ ಖಾತೆದಾರರು ಮೃತಪಟ್ಟರೆ ವಿಮಾ ಮೊತ್ತವನ್ನು ಯಾರು ಪಡೆಯಬಹುದು?ಯೋಜನೆಗೆ ಸೇರಿದ್ದ ಖಾತೆದಾರರು ಮೃತಪಟ್ಟಲ್ಲಿ, ನೋಂದಣಿ ಫಾರ್ಮ್ನಲ್ಲಿ ನಮೂದಿಸಿರುವ ನಾಮಿನಿ / ನಿಯೋಜಿತ ವ್ಯಕ್ತಿಯು ಕ್ಲೈಮ್ ಸಲ್ಲಿಸಬಹುದು. ನಾಮಿನಿ ಇರದಿದ್ದರೆ ಕಾನೂನುಬದ್ಧ ವಾರಸುದಾರರು ಅರ್ಜಿ ಸಲ್ಲಿಸಬಹುದು.
ವಿಮಾ ಕ್ಲೈಮ್ ಮೊತ್ತವನ್ನು ಹೇಗೆ ಪಾವತಿಸಲಾಗುತ್ತದೆ?
ಅಂಗವೈಕಲ್ಯ ಸಂಬಂಧಿತ ಕ್ಲೈಮ್ ಮೊತ್ತವನ್ನು ವಿಮೆ ಹೊಂದಿರುವ ಖಾತೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮರಣ ಸಂಬಂಧಿತ ಕ್ಲೈಮ್ ಮೊತ್ತವನ್ನು ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಖಾತೆದಾರರು ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬಕ್ಕೆ ವಿಮಾ ಲಾಭ ಸಿಗುತ್ತದೆಯೇ?
ಇಲ್ಲ.
ಯೋಜನೆಯ ಲಾಭ ಪಡೆಯಲು ಅಪಘಾತವನ್ನು ಪೊಲೀಸರಿಗೆ ತಿಳಿಸಿ FIR ಪಡೆಯುವುದು ಅಗತ್ಯವೇ?
ರಸ್ತೆ, ರೈಲು ಅಥವಾ ಇತರ ವಾಹನ ಅಪಘಾತಗಳು, ಮುಳುಗಿ ಸಾವು, ಅಪರಾಧ ಸಂಬಂಧಿತ ಸಾವುಗಳಂತಹ ಸಂದರ್ಭಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡಿ FIR ದಾಖಲಿಸಬೇಕು. ಹಾವು ಕಚ್ಚುವುದು, ಮರದಿಂದ ಬೀಳುವುದು ಮುಂತಾದ ಸಂದರ್ಭಗಳಲ್ಲಿ ತಕ್ಷಣದ ಆಸ್ಪತ್ರೆಯ ದಾಖಲೆಗಳು ಸಾಕ್ಷಿಯಾಗಿ ಇರಬೇಕು.
ವಿಮೆ ಪಡೆದ ವ್ಯಕ್ತಿ ಕಾಣೆಯಾಗಿದ್ದರೆ ಮತ್ತು ಮರಣ ದೃಢಪಡಿಸದಿದ್ದರೆ ವಾರಸುದಾರರಿಗೆ ವಿಮಾ ಲಾಭ ಸಿಗುತ್ತದೆಯೇ?
PMSBY ಯೋಜನೆಯಡಿ ಅಪಘಾತದಿಂದ ಮರಣ ಸಂಭವಿಸಿದೆ ಎಂಬುದು ದಾಖಲೆಗಳ ಮೂಲಕ ದೃಢಪಟ್ಟಿದ್ದರೆ ಮಾತ್ರ ವಿಮಾ ಲಾಭ ದೊರೆಯುತ್ತದೆ.
ಒಂದು ಕಣ್ಣಿನ ದೃಷ್ಟಿ ಅಥವಾ ಒಂದು ಕೈ/ಕಾಲಿನ ಬಳಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳದೇ ಭಾಗಶಃ ಅಂಗವೈಕಲ್ಯ ಉಂಟಾದರೆ ಲಾಭ ಸಿಗುತ್ತದೆಯೇ?
PMSBY ಯೋಜನೆಯ ನಿಯಮಗಳ ಪ್ರಕಾರ ನಿರ್ದಿಷ್ಟ ರೀತಿಯ ಶಾಶ್ವತ ಅಂಗವೈಕಲ್ಯಗಳಿಗೆ ಮಾತ್ರ ವಿಮಾ ಲಾಭ ನೀಡಲಾಗುತ್ತದೆ.
ಒಬ್ಬ ವ್ಯಕ್ತಿ ಹಲವು ಬ್ಯಾಂಕ್ ಖಾತೆಗಳ ಮೂಲಕ ಸೇರಿದ್ದರೆ ಒಂದಕ್ಕಿಂತ ಹೆಚ್ಚು ಕ್ಲೈಮ್ ಪಡೆಯಬಹುದೇ?
ಇಲ್ಲ. ವಿಮೆ ಪಡೆದ ವ್ಯಕ್ತಿ ಅಥವಾ ನಾಮಿನಿಗೆ ಒಂದು ಕ್ಲೈಮ್ ಮಾತ್ರ ಲಭ್ಯ.
ಒಬ್ಬ ವ್ಯಕ್ತಿ ಹಲವು ಬ್ಯಾಂಕ್ ಖಾತೆಗಳ ಮೂಲಕ PMSBY ಯೋಜನೆಗೆ ಸೇರಬಹುದೇ?
ಇಲ್ಲ. ಒಬ್ಬ ವ್ಯಕ್ತಿ ಒಂದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಬಹುದು.
ಯೋಜನೆಗೆ ಸೇರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?
18 ವರ್ಷ ಪೂರ್ಣಗೊಂಡಿದ್ದು 70 ವರ್ಷ ವಯಸ್ಸಿನೊಳಗಿನವರು ಈ ಯೋಜನೆಗೆ ಅರ್ಹರು.
ಪ್ರೀಮಿಯಂ ಹಣವನ್ನು ಹೇಗೆ ಪಾವತಿಸಲಾಗುತ್ತದೆ?
ನೋಂದಣಿಯ ಸಮಯದಲ್ಲಿ ನೀಡಿದ ಒಪ್ಪಿಗೆಯಂತೆ, ಪ್ರೀಮಿಯಂ ಮೊತ್ತವನ್ನು ಬ್ಯಾಂಕ್ / ಅಂಚೆ ಕಚೇರಿ ಖಾತೆಯಿಂದ ಆಟೋ ಡೆಬಿಟ್ ಮೂಲಕ ಕಡಿತಗೊಳಿಸಲಾಗುತ್ತದೆ.
ಮೊದಲ ವರ್ಷ ಯೋಜನೆಗೆ ಸೇರದವರು ನಂತರದ ವರ್ಷಗಳಲ್ಲಿ ಸೇರಬಹುದೇ?
ಹೌದು. ಅರ್ಹ ವ್ಯಕ್ತಿಗಳು ನಂತರದ ವರ್ಷಗಳಲ್ಲಿಯೂ ಯೋಜನೆಗೆ ಸೇರಬಹುದು.
ಮೊದಲ ವರ್ಷ ಯೋಜನೆಗೆ ಸೇರದವರು ನಂತರ ಸೇರಬಹುದೇ?
ಹೌದು. ಆಟೋ-ಡೆಬಿಟ್ ಮೂಲಕ ಪ್ರೀಮಿಯಂ ಪಾವತಿಸಿದರೆ ನಂತರದ ವರ್ಷಗಳಲ್ಲಿಯೂ ಹೊಸ ಅರ್ಹರು ಯೋಜನೆಗೆ ಸೇರಬಹುದು.
ಯೋಜನೆಯನ್ನು ಮಧ್ಯದಲ್ಲಿ ಬಿಟ್ಟವರು ಮತ್ತೆ ಸೇರಬಹುದೇ?
ಹೌದು. ಯೋಜನೆಯನ್ನು ತೊರೆದವರು ಭವಿಷ್ಯದಲ್ಲಿ ವಾರ್ಷಿಕ ಪ್ರೀಮಿಯಂ ಪಾವತಿಸಿ, ನಿಯಮಾನುಸಾರ ಮತ್ತೆ ಯೋಜನೆಗೆ ಸೇರಬಹುದು.
ಈ ವಿಮಾ ರಕ್ಷಣೆ ಇತರ ವಿಮಾ ಯೋಜನೆಗಳ ಜೊತೆಯಲ್ಲಿಯೂ ಅನ್ವಯವಾಗುತ್ತದೆಯೇ?
ಹೌದು.
ಭೂಕಂಪ, ಪ್ರವಾಹ ಮುಂತಾದ ಪ್ರಕೃತಿ ವಿಕೋಪಗಳಿಂದ ಮರಣ ಅಥವಾ ಅಂಗವೈಕಲ್ಯ ಉಂಟಾದರೆ ವಿಮಾ ರಕ್ಷಣೆ ಸಿಗುತ್ತದೆಯೇ? ಆತ್ಮಹತ್ಯೆ ಅಥವಾ ಕೊಲೆ ಪ್ರಕರಣಗಳಲ್ಲಿ ಏನು?
ಪ್ರಕೃತಿ ವಿಕೋಪಗಳು ಅಪಘಾತಗಳಾಗಿ ಪರಿಗಣಿಸಲಾಗುವುದರಿಂದ, ಅವುಗಳಿಂದ ಉಂಟಾಗುವ ಮರಣ ಅಥವಾ ಅಂಗವೈಕಲ್ಯಕ್ಕೂ PMSBY ಯೋಜನೆಯಡಿ ವಿಮಾ ರಕ್ಷಣೆ ಲಭ್ಯ.
ಆದರೆ ಆತ್ಮಹತ್ಯೆಯಿಂದ ಸಂಭವಿಸುವ ಮರಣಕ್ಕೆ ವಿಮಾ ರಕ್ಷಣೆ ಇಲ್ಲ. ಕೊಲೆ ಪ್ರಕರಣಗಳಲ್ಲಿ ವಿಮಾ ರಕ್ಷಣೆ ದೊರೆಯುತ್ತದೆ.
ಜಂಟಿ ಬ್ಯಾಂಕ್ ಖಾತೆದಾರರೆಲ್ಲರೂ ಯೋಜನೆಗೆ ಸೇರಬಹುದೇ?
ಹೌದು. ಜಂಟಿ ಖಾತೆಯ ಪ್ರತಿಯೊಬ್ಬರೂ ಅರ್ಹತಾ ನಿಯಮಗಳನ್ನು ಪೂರೈಸಿದರೆ ಹಾಗೂ ವರ್ಷಕ್ಕೆ ಪ್ರತಿಯೊಬ್ಬರೂ ರೂ.20 ಪ್ರೀಮಿಯಂ ಆಟೋ-ಡೆಬಿಟ್ ಮೂಲಕ ಪಾವತಿಸಿದರೆ ಯೋಜನೆಗೆ ಸೇರಬಹುದು.
ಯಾವ ಬ್ಯಾಂಕ್ ಖಾತೆಗಳು PMSBY ಯೋಜನೆಗೆ ಅರ್ಹ?
ಸಂಸ್ಥೆಗಳ ಖಾತೆಗಳನ್ನು ಹೊರತುಪಡಿಸಿ, ಎಲ್ಲಾ ಬ್ಯಾಂಕ್ ಮತ್ತು ಅಂಚೆ ಕಚೇರಿ ಖಾತೆದಾರರು PMSBY ಯೋಜನೆಗೆ ಸೇರಲು ಅರ್ಹರು.
NRI ಗಳು PMSBY ಯೋಜನೆಗೆ ಸೇರಬಹುದೇ?
ಹೌದು. ಭಾರತದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಅರ್ಹ ಖಾತೆ ಹೊಂದಿರುವ NRI ಗಳು ಯೋಜನೆಗೆ ಸೇರಬಹುದು. ಆದರೆ ಕ್ಲೈಮ್ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲೇ ನಾಮಿನಿ ಅಥವಾ ಫಲಾನುಭವಿಗೆ ಪಾವತಿಸಲಾಗುತ್ತದೆ.
PMSBY ಯೋಜನೆ – ಪ್ರಮುಖ ವಿವರಗಳು
ಪ್ರೀಮಿಯಂ
ಪ್ರತಿ ಸದಸ್ಯರಿಗೆ ವರ್ಷಕ್ಕೆ ರೂ.20/- ಪ್ರೀಮಿಯಂ ಪಾವತಿಸಬೇಕು. ಈ ಮೊತ್ತವನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಡಿತಗೊಳಿಸಲಾಗುತ್ತದೆ.
ವಿಮಾ ಅವಧಿ
ಪ್ರತಿ ವರ್ಷ ಜೂನ್ 1ರಿಂದ ಮುಂದಿನ ವರ್ಷದ ಮೇ 31ರವರೆಗೆ ವಿಮಾ ರಕ್ಷಣೆ ಮಾನ್ಯವಾಗಿರುತ್ತದೆ.
ವಿಮಾ ರಕ್ಷಣೆ ರದ್ದಾಗುವ ಸಂದರ್ಭಗಳು
ಕೆಳಗಿನ ಸಂದರ್ಭಗಳಲ್ಲಿ ವಿಮಾ ರಕ್ಷಣೆ ರದ್ದಾಗಬಹುದು ಅಥವಾ ಮಿತಿಗೊಳಿಸಬಹುದು:
- ಸದಸ್ಯರು 70 ವರ್ಷ ವಯಸ್ಸು ತಲುಪಿದಾಗ
- ಬ್ಯಾಂಕ್ ಖಾತೆ ಮುಚ್ಚಿದಾಗ
- ಖಾತೆಯಲ್ಲಿ ಪ್ರೀಮಿಯಂ ಕಡಿತಕ್ಕೆ ಅಗತ್ಯವಿರುವಷ್ಟು ಮೊತ್ತ ಇಲ್ಲದಿದ್ದಾಗ
ಒಬ್ಬ ಸದಸ್ಯರು ಹಲವಾರು ಖಾತೆಗಳ ಮೂಲಕ ಸೇರಿದ್ದರೆ, ವಿಮಾ ರಕ್ಷಣೆ ಗರಿಷ್ಠ ರೂ.2 ಲಕ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಯೋಜನೆಯ ಲಾಭಗಳು
- ಮರಣ ಹೊಂದಿದಲ್ಲಿ ನಾಮಿನಿಗೆ ರೂ.2 ಲಕ್ಷ ನೀಡಲಾಗುತ್ತದೆ.
- ಎರಡೂ ಕಣ್ಣುಗಳ ದೃಷ್ಟಿ ಅಥವಾ ಎರಡೂ ಕೈ/ಕಾಲುಗಳ ಬಳಕೆ ಸಂಪೂರ್ಣ ಕಳೆದುಕೊಂಡಲ್ಲಿ ಸದಸ್ಯರಿಗೆ ರೂ.2 ಲಕ್ಷ ಪರಿಹಾರ ದೊರೆಯುತ್ತದೆ.
- ಒಂದು ಕಣ್ಣಿನ ದೃಷ್ಟಿ ಅಥವಾ ಒಂದು ಕೈ/ಕಾಲಿನ ಬಳಕೆ ಸಂಪೂರ್ಣ ಕಳೆದುಕೊಂಡಲ್ಲಿ ಸದಸ್ಯರಿಗೆ ರೂ.1 ಲಕ್ಷ ನೀಡಲಾಗುತ್ತದೆ.
ಹೆಚ್ಚಿನ ವಿವರಗಳನ್ನು ತಿಳಿಯಲು, ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಇಂದೇ ಭೇಟಿ ನೀಡಿ.
| ಉದ್ಯೋಗಿನಿ (ಮಹಿಳಾ) ಯೋಜನೆ 2026 | ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |
